ಅನುವಾದ
ಭಾಮಾ ದಲಿತ ಪ್ರಜ್ಞೆ
ಲೇಖಕ: ಡಾ. ಎಚ್.ಎಸ್. ನಾಗಭೂಷಣ
₹200₹22511% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಬಾಮಾ ಅವರ ಸಾಹಿತ್ಯದ ಆಶಯ ಹಾಗು ಧೋರಣೆಗಳನ್ನು ವಿಶ್ಲೇಷಿಸುವ ‘ಬಾಮಾ: ದಲಿತ ಪ್ರಜ್ಞೆ’(ಮೂಲ: ಆರ್.ಕೆ.ಧವನ್ ಮತ್ತು ಸುನಿತಾ ಪುರಿ; ಅನು: ಎಚ್.ಎಸ್ ನಾಗಭೂಷಣ) ಎನ್ನುವ ಪುಸ್ತಕವು ಪ್ರಸ್ತುತ ಸಂದರ್ಭದಲ್ಲಿ ಸಾಮಯಿಕವಾಗಿದೆ ಎಂದು ಭಾವಿಸುತ್ತೇನೆ. ಇಂದು ದಲಿತ ಸಾಹಿತ್ಯ ಮತ್ತು ಅದರ ಉತ್ತರೋತ್ತರ ಚರ್ಚೆಗಳು ಸಮಕಾಲೀನ ಸಾಹಿತ್ಯ ಮತ್ತು ಸಂಸ್ಕೃತಿ ಸಂದರ್ಭಗಳಲ್ಲಿ ನಡೆಯುತ್ತಿದೆ. ಅವುಗಳಲ್ಲಿ ಇಂದು ಅಂಬೇಡ್ಕರ್ ನಂತರ ಭಾರತೀಯ ಚರಿತ್ರೆಯಲ್ಲಿ ದಲಿತ ಎನ್ನುವ ಐಡಿಯಾಲಾಜಿಯ ಬೆಳವಣಿಗೆಯನ್ನು ಗಮನಿಸಲೇಬೇಕಾದ ಅಗತ್ಯವೂ ಉಂಟಾಗಿದ್ದು ದಲಿತ ಎನ್ನುವ ಅಸ್ಮಿತೆಯನ್ನು ರಾಜಕೀಯ, ಸಾಮಾಜಿಕ ಹಾಗು ಸಾಂಸ್ಕೃತಿಕ ಸಂದರ್ಭಗಳಲ್ಲಿ ಪುನಾ ವಿವರಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಈ ದೃಷ್ಟಿಯಿಂದ ನೆರೆನಾಡಿನ ದಲಿತ-ಸ್ತ್ರೀ ಬರಹಗಾರರಾದ ಬಾಮಾ ಅವರ ಸಾಹಿತ್ಯವನ್ನು ವಿಶ್ಲೇಷಣೆಗೆ ಒಳಪಡಿಸುವುದು ಪ್ರಸ್ತುತ ಎನಿಸುತ್ತದೆ. ಇಂಗ್ಲಿಷಿನಲ್ಲಿ ರೀಡರ್ ಮತ್ತು ರೈಟರ್ ಸರಣಿಗಳನ್ನು ನಿರೂಪಿಸುವ ಪರಂಪರೆ ಇದೆ. ಅದು ಓದಿನ ಒಂದು ಕ್ರಮವಾಗಿದ್ದು, ಒಬ್ಬ ಲೇಖಕ/ಕಿಯ ಕೃತಿಗಳನ್ನು ವಿವಿಧ ತತ್ವಗಳ ಹಿನ್ನೆಲೆಯಲ್ಲಿ, ಅನೇಕ ಸಮಕಾಲೀನ ದೃಷ್ಟಿಕೋನಗಳ ಹಿನ್ನೆಯಲ್ಲಿ ಓದುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ಒಬ್ಬ ಓದುಗ ಬರಹಗಾರ/ಗಾರ್ತಿಯ ಕೃತಿಗಳನ್ನು ತಲಸ್ಪರ್ಶಿಯಾಗಿ ಅರಿಯುವ ಅವಕಾಶಗಳು ಉಜ್ವಲವಾಗಿರುತ್ತದೆ. ಈ ದಿಸೆಯಲ್ಲಿ ಕನ್ನಡದ ಓದುಗರಿಗೆ ಬಾಮಾ ಅವರ ಸಾಹಿತ್ಯವನ್ನು ಇಂಗ್ಲಿಷಿನಲ್ಲಿ ಮಾಡಿದ ಓದುಗಳನ್ನು ನೀಡುವ ಪ್ರಯತ್ನವನ್ನು ಅನುವಾದದ ಮೂಲಕ ಎಚ್.ಎಸ್.ನಾಗಭೂಷಣ ಅವರು ಮಾಡಿರುವ ಪ್ರಯತ್ನ ಸ್ವಾಗತಾರ್ಹವಾದುದು.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 200 |
| ಪ್ರಕಟಣೆ ವರ್ಷ | 2017 |
| ಆವೃತ್ತಿ | 5th EDITION |
| ತೂಕ | 480 ಗ್ರಾಂ |
| ಆಯಾಮಗಳು | Book Size : 1/4 Crown(23x15.5) (International Standard Book Size) |





