ಮುಖ್ಯ ವಿಷಯಕ್ಕೆ ಹೋಗಿ (Skip to main content)
ಒಂದು ತುಂಡು ಗೋಡೆ   (ಕತೆಗಳು)
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್10% ರಿಯಾಯಿತಿ
ಕಥೆಗಳು

ಒಂದು ತುಂಡು ಗೋಡೆ (ಕತೆಗಳು)

ಲೇಖಕ: ಬೊಳುವಾರು ಮಹಮದ್ ಕುಂಞಿ

₹135₹15010% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

‘ಮುತ್ತುಪ್ಪಾಡಿ’ ಊರ ತುಂಬ ಮನುಷ್ಯರನ್ನು ಹುಟ್ಟಿಸಿದೆ; ಅವರಿಗೆ ನಂಬಲೆಂದು ದೇವರುಗಳನ್ನು ಸೃಷ್ಟಿಸಿದೆ. ಪೂಜಿಸಲು ಮಂದಿರ, ಪ್ರಾರ್ಥಿಸಲು ಮಸೀದಿ, ಒಂದು ತುಂಡು ಗೋಡೆ / ೭ ಓದಲು ಶಾಲೆ, ಕವಾಯತಿಗೆ ಮೈದಾನ, ಈಜಲು ಹೊಳೆ, ಹಾರಲು ಕೆರೆ, ಮಲಗಲು ಆಸ್ಪತೆ , ಅಳಲು ಸ್ಮಶಾನ, ಹೂಳಲು ಕಬರ್‌ಸ್ಥಾನ, ಆಳಲು ಪೊಲೀಸ್ - ಏನೇನು ಬೇಕೋ ಅದೆಲ್ಲವನ್ನೂ ಒದಿಸಿದೆ. ನಂತರ ಮುತ್ತುಪ್ಪಾಡಿಯ ಮನುಷ್ಯರಿಗೆ ಸ್ವಾತಂತ ಕೊಟ್ಟೆ. ಅವರನ್ನೆಲ್ಲ ಅವರಿಷ್ಟದಂತೆ ಬದುಕಲು ಬಿಟ್ಟು, ಅವರದೇ ಕತೆ ಬರೆದು ಪತ್ರಿಕೆಗಳಿಗೆ ಕಳುಹಿಸಲಾರಂಭಿಸಿದೆ. ನವಭಾರತದ ಮಲ್ಯರು, ಉದಯವಾಣಿಯ ಬನ್ನಂಜೆಯವರು, ಪ ಜಾವಾಣಿಯ ರಂಗನಾಥರಾಯರು, ಸುಧಾದ ಎಂ.ಬಿ. ಸಿಂಗ್, ತುಷಾರದ ಈಶ್ವರಯ್ಯ, ಕಸ್ತೂರಿಯ ಪಾ.ವೆಂ., ಮಯೂರದ ದಿವಾಕರ, ಮೊದಲಾದ ಸಂಪಾದಕರನೇಕರು ನನ್ನನ್ನು ಬೆಂಬಲಿಸಿ, ಮುತ್ತುಪ್ಪಾಡಿಯ ಬದುಕಿಗೆ ಸಾಕ್ಷಿ ಹೇಳಿದರು. ಸುಮಾರು ೨೦ ವರ್ಷಗಳ ಕಾಲ ಮುತ್ತುಪ್ಪಾಡಿಯ ಕತೆಗಳು ಯಾವುದಾದರೊಂದು ಪತ್ರಿಕೆಯಲ್ಲಿ ಕಷ ತಿಂಗಳಿಗೊಂದಾದರೂ ಪ ಕಟವಾಗುವಂತೆ ನೋಡಿಕೊಂಡರು. ಅಗತ್ಯ ಅನ್ನಿಸಿದಾಗಲೆಲ್ಲ ಆರೋಗ್ಯಕರವಾದ ಸಂವಾದ-ಚರ್ಚೆಗೆ ವೇದಿಕೆ ಒದಗಿಸಿ ತಿಂಗಳುಗಟ್ಟಲೆ ಓದುಗರನ್ನು ಹುರಿದುಂಬಿಸಿದರು. ನನ್ನ ಕತೆಗಳು ಒಮ್ಮೆ ಒಬ್ಬರಿಗೆ ಪಥ್ಯವಾದರೆ ಇನ್ನೊಬ್ಬರಿಗೆ ಅಪಥ್ಯವಾಗುತ್ತಿದ್ದವು. ಒಬ್ಬರಿಗೆ ನೋವಾಗಿದೆಯೆಂಬ ಕಾರಣಕ್ಕೆ ಇನ್ನೊಬ್ಬರಿಗೆ ಸಂತೋಷವಾದದ್ದೂ ಉಂಟು. ಮುಸ್ಲಿಮನೊಬ್ಬ ‘ರಾಶನಲ್’ ಆಗುವುದೆಂದರೆ ‘ಹಿಂದೂ’ ಆಗುವುದು ಎಂದು ಪ್ರಾಮಾಣಿಕವಾಗಿ ನಂಬಿದ ಓದುಗರೂ ಉತ್ಸಾಹದಿಂದ ಚರ್ಚೆಯಲ್ಲಿ ಪಾಲುಗೊಂಡರು. ಇವೆಲ್ಲವನ್ನೂ ಅರಿತೂ ಅರಿಯದವನಂತೆ ಸಂಕಟ ಅನುs ವಿಸುವುದಷೆ ನನ್ನ ಪಾಲಿನ ಕೆಲಸವಾಗಿತ್ತು. ಯಾಕೆಂದರೆ ನನ್ನ ಉದ್ದೇಶ ಕೇವಲ ಕತೆ ಬರೆಯುವುದ್ದಾಗಿದ್ದಿರಲಿಲ್ಲ; ಕಲೆಗಾರಿಕೆ, ತಂತ -ವಿನ್ಯಾಸಗಳು ನನಗೆ ಮುಖ್ಯವಾಗಿದ್ದಿರಲಿಲ್ಲ. ನನಗೆ ಹೊಸ ಧರ್ಮವೊಂದನ್ನು ಕಟ್ಟಬೇಕಾಗಿತ್ತು; ಯಾಕೆಂದರೆ ಧರ್ಮಗ್ರಂಥಗಳು ಅನೇಕವಿದ್ದವು. ‘ಒಂದು ತುಂಡು ಗೋಡೆ’ ನನ್ನ ಐದನೇ ಕಥಾಸಂಕಲನ.

ವಿಶೇಷತೆಗಳು

ISBN 978-93-81577-99-87
ಭಾಷೆಕನ್ನಡ
ಪುಟಗಳು148
ಪ್ರಕಟಣೆ ವರ್ಷ2021
ಆವೃತ್ತಿ2nd
ತೂಕ350 ಗ್ರಾಂ
ಆಯಾಮಗಳು-